『ವಿಚಾರ ಮಂಥನ : By Dr.King, Swami Satyapriya』のカバーアート

ವಿಚಾರ ಮಂಥನ : By Dr.King, Swami Satyapriya

ವಿಚಾರ ಮಂಥನ : By Dr.King, Swami Satyapriya

著者: Dr. King
無料で聴く

ಜೀವನವನ್ನು ಹೆಚ್ಚು ಆಳವಾಗಿ ಅರ್ಥಮಾಡಿಕೊಳ್ಳಲು ವಿಜ್ಞಾನ, ತತ್ತ್ವಶಾಸ್ತ್ರ ಮತ್ತು ಆಧ್ಯಾತ್ಮಿಕತೆಯ ಸಂಗಮ. ಅರ್ಥಪೂರ್ಣ ಹಾಗೂ ಉನ್ನತ ಜೀವನಕ್ಕಾಗಿ ಪ್ರೇರಣಾದಾಯಕ ವಿಚಾರಗಳು ಮತ್ತು ಆರೋಗ್ಯಕರ ಚಿಂತನೆಗಳು.(c) Dr. King スピリチュアリティ
エピソード
  • [Kannada] ಓಂಕಾರದ ಜಾದೂ (ಭಾಗ 4) : ಇರುವುದು ಒಂದೇ ಪ್ರಜ್ಞೆ, ಅನೇಕವಲ್ಲ!
    2026/07/25
    [Preview books] [Borrow books] [Pause] ಕಳೆದ ಕೆಲವು ಸಂಚಿಕೆಗಳಲ್ಲಿ, ನಾವು ಪ್ರಜ್ಞೆಯ ಬಗ್ಗೆ ಚರ್ಚಿಸಿದ್ದೆವು. ಜಾಗ್ರತ ಸ್ಥಿತಿ, ಸ್ವಪ್ನ ಸ್ಥಿತಿ, ಸುಷುಪ್ತಿ ಸ್ಥಿತಿ ಹಾಗೂ ವರ್ಣಿಸಲಾಗದ ತುರೀಯ ಸ್ಥಿತಿ ಎಂಬ ಪ್ರಜ್ಞೆಯ ಈ ನಾಲ್ಕು ಸ್ಥಿತಿಗಳ ಕುರಿತು ನಾವು ಮಾತನಾಡಿದ್ದೆವು. ಎಲ್ಲಾ ಜೀವಿಗಳು ಬೇರೆ ಬೇರೆ ಸಮಯಗಳಲ್ಲಿ ಈ ನಾಲ್ಕು ಪ್ರಜ್ಞೆಯ ಸ್ಥಿತಿಗಳಲ್ಲಿ ಒಂದನ್ನು ಅನುಭವಿಸುತ್ತವೆ.ನಮ್ಮ ಚರ್ಚೆಯು ಭಾರತದ ಪ್ರಾಚೀನ ಉಪನಿಷತ್ತುಗಳಲ್ಲಿ ಒಂದಾದ ಮಾಂಡೂಕ್ಯ ಉಪನಿಷತ್ತನ್ನು ಆಧರಿಸಿತ್ತು.ಹಿಂದಿನ ಸಂಚಿಕೆಯ ಕೊನೆಯಲ್ಲಿ, ಭಾರತದ ಅನೇಕ ಅದ್ವೈತ ತತ್ತ್ವಜ್ಞಾನಿಗಳು ಪ್ರಜ್ಞೆಯ ಈ ಸ್ಥಿತಿಗಳ ಬಗ್ಗೆ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದಾರೆ ಎಂದು ನಾನು ಸುಳಿವು ನೀಡಿದ್ದೆ. ಈ ಸಂಚಿಕೆಯಲ್ಲಿ, ಗೌಡಪಾದರು ತಮ್ಮ ಪ್ರಸಿದ್ಧ ಮಾಂಡೂಕ್ಯ ಕಾರಿಕೆಯಲ್ಲಿ - ಅಂದರೆ ಮಾಂಡೂಕ್ಯ ಉಪನಿಷತ್ತಿನ ವಿವರಣೆಯಲ್ಲಿ - ಸೂಚಿಸಿದ ಪರ್ಯಾಯ ದೃಷ್ಟಿಕೋನವನ್ನು ನಾನು ಸಂಕ್ಷಿಪ್ತವಾಗಿ ಚರ್ಚಿಸಲಿದ್ದೇನೆ.ಯಾರು ಈ ಗೌಡಪಾದರು ?ಗೌಡಪಾದರು ಅದ್ವೈತ ಸಿದ್ಧಾಂತದ ಮೂಲ ತತ್ತ್ವಜ್ಞಾನಿ. ಅವರು ಕ್ರಿ.ಶ. ೬ ನೇ ಶತಮಾನಕ್ಕೆ ಸೇರಿದವರು. ಅವರು ಪ್ರಸಿದ್ಧ ಅದ್ವೈತ ತತ್ತ್ವಜ್ಞಾನಿ ಶಂಕರರ ಪರಮಗುರುಗಳಾಗಿದ್ದರು.ಗೌಡಪಾದರು ಏನು ಹೇಳಿದರು? ಗೌಡಪಾದರ ಪ್ರಕಾರ, ಮಾಂಡೂಕ್ಯ ಉಪನಿಷತ್ತಿನಲ್ಲಿ ವಿವರಿಸಲಾದ ಪ್ರಜ್ಞೆಯ ಮೊದಲ ಮೂರು ಸ್ಥಿತಿಗಳು ಕೇವಲ ತೋರಿಕೆಗಳಷ್ಟೇ ಹೊರತು ನಿಜವಲ್ಲ. ಏಕೈಕ ಸತ್ಯವಾದ ಸ್ಥಿತಿಯೆಂದರೆ ತುರೀಯ, ಅದುವೇ ಇತರ ಮೂರು ಸ್ಥಿತಿಗಳೆಂಬಂತೆ 'ತೋರುತ್ತದೆ'.ಒಂದೇ ಪ್ರಜ್ಞೆಯ ಸ್ಥಿತಿಯು ಇತರ ಮೂರು ಸ್ಥಿತಿಗಳಾಗಿ ಹೇಗೆ ತೋರಿಕೊಳ್ಳುತ್ತದೆ ಎಂಬುದನ್ನು ವಿವರಿಸಲು ಗೌಡಪಾದರು ವಿವಿಧ ಉಪಮೆಗಳನ್ನು ನೀಡುತ್ತಾರೆ.ಕನಸಿನ ಉಪಮೆ:ಒಬ್ಬ ವ್ಯಕ್ತಿ ಕನಸು ಕಾಣುವಾಗ, ಅವನು ಅನೇಕ ಜನರನ್ನು, ಅನೇಕ ಸ್ಥಳಗಳನ್ನು ಮತ್ತು ಅನೇಕ ಘಟನೆಗಳನ್ನು ಕಾಣುತ್ತಾನೆ. ಆದರೆ, ವಾಸ್ತವದಲ್ಲಿ, ಇವೆಲ್ಲವೂ ಒಂದೇ ಮನಸ್ಸಿನ ಸೃಷ್ಟಿ - ಅಂದರೆ ಕನಸು ಕಾಣುವವನ ಮನಸ್ಸಿನ ಸೃಷ್ಟಿ. ಅಂತೆಯೇ, ಏಕೈಕ ವಿಶ್ವ ಪ್ರಜ್ಞೆಯು ಪ್ರತಿಯೊಬ್ಬ ಜೀವಿಯೂ ಒಂದು ನಿರ್ದಿಷ್ಟ ಪ್ರಜ್ಞೆಯ ಸ್ಥಿತಿಯಲ್ಲಿದ್ದಂತೆ ಕಾಣುವ ಅನೇಕ ಜೀವಿಗಳ ಅಸ್ತಿತ್ವದ ಭ್ರಮೆಯನ್ನು ಸೃಷ್ಟಿಸುತ್ತದೆ ಎಂದು ಗೌಡಪಾದರು ಹೇಳುತ್ತಾರೆ.ಈ ಜೀವಿಗಳಿಗೆ ಸ್ವತಂತ್ರ ಅಸ್ತಿತ್ವವಿಲ್ಲ. ಅವು ಕನಸಿನ ಸಮಯದಲ್ಲಿ ಕಾಣುವ ತೋರಿಕೆಗಳಿದ್ದಂತೆ. ಕನಸಿನ ಹೊರಗೆ, ಎಲ್ಲಾ ಕನಸಿನ ವಸ್ತುಗಳೂ ಇಲ್ಲವಾಗುತ್ತವೆ, ಏಕೆಂದರೆ ಅವು ಎಂದಿಗೂ ನಿಜವಾಗಿ ಅಸ್ತಿತ್ವದಲ್ಲಿರಲಿಲ್ಲ. ಅವು ಕೇವಲ ಇದ್ದಂತೆ ತೋರುತ್ತಿದ್ದವು ಅಷ್ಟೇ. ಹಾಗೆಯೇ ವಾಸ್ತವದಲ್ಲಿ ಇದ್ದಂತೆ ಕಾಣುವ ವೈವಿದ್ಯವೂ ಕೂಡಾ.ಒಂದೇ ಒಂದು ಪ್ರಜ್ಞೆ ಮಾತ್ರ ಇದ್ದರೂ ...
    続きを読む 一部表示
    1分未満
  • [Kannada] ಓಂಕಾರದ ಜಾದೂ - ಪ್ರಜ್ಞೆಯ ವಿವರಿಸಲಾಗದ ನಾಲ್ಕನೆಯ ಸ್ಥಿತಿ.
    2026/07/18
    [Preview books] [Borrow books] [Play] ಹಿಂದಿನ ಸಂಚಿಕೆಯಲ್ಲಿ, ನಮ್ಮ ಪ್ರಾಚೀನ ಭಾರತೀಯ ತತ್ವಜ್ಞಾನಿಗಳು ವಿವರಿಸಿದ ಪ್ರಜ್ಞೆಯ ಮೂರು ಸ್ಥಿತಿಗಳ ಬಗ್ಗೆ ನಾವು ಚರ್ಚಿಸಿದ್ದೆವು. ನಾವು ನಮ್ಮ ಚರ್ಚೆಗೆ ಉಪನಿಷತ್ತುಗಳಲ್ಲಿ ಒಂದಾದ ಮಾಂಡೂಕ್ಯ ಉಪನಿಷತ್ತನ್ನು ಆಧಾರವಾಗಿಟ್ಟುಕೊಂಡಿದ್ದೆವು.ಈ ಉಪನಿಷತ್ತು, ಜಾಗೃತ ಸ್ಥಿತಿ, ಸ್ವಪ್ನ ಸ್ಥಿತಿ ಮತ್ತು ಸುಷುಪ್ತಿ ಸ್ಥಿತಿ ಎಂಬ ಪ್ರಜ್ಞೆಯ ಮೂರು ಸ್ಥಿತಿಗಳ ಬಗ್ಗೆ ಮಾತನಾಡುತ್ತದೆ. ಇವು ಎಲ್ಲಾ ಜೀವಿಗಳಲ್ಲಿ ನಾವು ದಿನನಿತ್ಯ ನೋಡುವ ಮೂರು ಸ್ಥಿತಿಗಳಾಗಿವೆ. ಮುಂದುವರಿದು, ಉಪನಿಷತ್ತು 'ತುರೀಯ' ಎಂಬ ನಾಲ್ಕನೆಯ ಸ್ಥಿತಿಯ ಬಗ್ಗೆ ಮಾತನಾಡುತ್ತದೆ.ಏನಿದು ತುರೀಯ ಸ್ಥಿತಿ? ನೀವು ಯಾವುದೇ ಒಂದು ಹೊಸ ಪರಿಕಲ್ಪನೆಯನ್ನು ಪರಿಚಯಿಸುವಾಗ, ಅದನ್ನು ಈಗಾಗಲೇ ತಿಳಿದಿರುವ ಇತರ ವಿಷಯಗಳೊಂದಿಗೆ ಹೋಲಿಸಿ ನೋಡುವುದು, ಅಥವಾ ಅವುಗಳಿಂದ ಬೇರ್ಪಡಿಸಿ ಗುರುತಿಸುವುದು ಸಹಜ. ಈ ಉಪನಿಷತ್ತು ಸಹ ಮೊದಲಿಗೆ ಅದನ್ನೇ ಮಾಡುತ್ತದೆ.ತುರೀಯ ಸ್ಥಿತಿಯು ಜಾಗೃತ ಸ್ಥಿತಿಯಂತೆ ಅಲ್ಲ ಎಂದು ಉಪನಿಷತ್ತು ಹೇಳುತ್ತದೆ. ಜಾಗೃತ ಸ್ಥಿತಿಯಲ್ಲಿ, ನಮ್ಮ ಪ್ರಜ್ಞೆಯು ಹೊರಗಿನ ಪ್ರಪಂಚದೊಂದಿಗೆ ವ್ಯವಹರಿಸುತ್ತದೆ. ಆದರೆ ತುರೀಯ ಸ್ಥಿತಿಯಲ್ಲಿ ಅಂತಹ ಯಾವುದೇ ಬಾಹ್ಯ ವ್ಯವಹಾರವಿರುವುದಿಲ್ಲ.ಈ ಪ್ರಜ್ಞೆಯು ಯಾವುದೇ ಕನಸುಗಳನ್ನೂ ಸೃಷ್ಟಿಸುವುದಿಲ್ಲ ಎಂದೂ ಉಪನಿಷತ್ತು ಹೇಳುತ್ತದೆ. ಇದರರ್ಥ ಇದು ಕನಸಿನ ಸ್ಥಿತಿಗಿಂತಲೂ ಭಿನ್ನವಾಗಿದೆ.ಈ ತುರೀಯ ಸ್ಥಿತಿಯು ಅರ್ಧ ಕನಸು ಮತ್ತು ಅರ್ಧ ಎಚ್ಚರದ ಸ್ಥಿತಿಯಾಗಿರಲು ಸಾಧ್ಯವೇ? ಉಪನಿಷತ್ತು ಆ ಸಾಧ್ಯತೆಯನ್ನೂ ನಿರಾಕರಿಸುತ್ತದೆ.ಹಾಗಿದ್ದಲ್ಲಿ, ನಮಗೆ ಉಳಿಯುವ ಒಂದೇ ಒಂದು ಪರ್ಯಾಯವೆಂದರೆ, ತುರೀಯವು ಗಾಢ ನಿದ್ರೆಯ ಸ್ಥಿತಿಯಂತೆ ಸಂಪೂರ್ಣವಾಗಿ ಹೆಪ್ಪುಗಟ್ಟಿದ ಪ್ರಜ್ಞೆಯ ಸ್ಥಿತಿಯಾಗಿರಬೇಕು ಎಂಬುದು. ಗಾಢ ನಿದ್ರೆಯಲ್ಲಿ ನಾವು ಅದನ್ನೇ ಗಮನಿಸುತ್ತೇವೆ. ಆದರೆ ಉಪನಿಷತ್ತು ಆ ಸಾಧ್ಯತೆಯನ್ನೂ ಸಹ ತಳ್ಳಿಹಾಕುತ್ತದೆ.ಅದೇ ಸಮಯದಲ್ಲಿ, ತುರೀಯವು ಯಾವುದೇ ಅರಿವಿಲ್ಲದ ಶೂನ್ಯ ಸ್ಥಿತಿಯೂ ಅಲ್ಲ, ಹಾಗೆಯೇ ಯಾವುದೇ ನಿರ್ದಿಷ್ಟ ವಸ್ತುವಿನ ಅರಿವಿರುವ ಸ್ಥಿತಿಯೂ ಅಲ್ಲ ಎಂದೂ ಉಪನಿಷತ್ತು ಹೇಳುತ್ತದೆ.ಉಪನಿಷತ್ತು ಈ ಎಲ್ಲ ಅವಲೋಕನಗಳನ್ನು ಹೀಗೆ ಸಂಕ್ಷಿಪ್ತವಾಗಿ ಹೇಳುತ್ತದೆ:"ನ ಅಂತಃಪ್ರಜ್ಞಂ, ನ ಬಹಿಃಪ್ರಜ್ಞಂ, ನ ಉಭಯತಃಪ್ರಜ್ಞಂ, ನ ಪ್ರಜ್ಞಾನಘನಂ, ನ ಪ್ರಜ್ಞಂ, ನ ಅಪ್ರಜ್ಞಂ"ಹಾಗಾದರೆ, ತುರೀಯವು ನಿಜವಾಗಿ ಏನಾಗಿದೆ?ಯಾವುದನ್ನಾದರೂ 'ಹೀಗಿದೆ' ಎಂದು ವರ್ಣಿಸಬೇಕಾದರೆ, ಅದು ಇಂದ್ರಿಯಗಳಿಗೆ ಗೋಚರಿಸುವಂತಿರಬೇಕು. ಆದರೆ ಉಪನಿಷತ್ತು ಹೇಳುತ್ತದೆ - ತುರೀಯವು ಇಂದ್ರಿಯಗಳಿಂದ ಗ್ರಹಿಸಬಹುದಾದ ಯಾವುದೇ ವಸ್ತುವಲ್ಲ!ಕೆಲವೊಮ್ಮೆ, ಒಂದು ವಸ್ತುವನ್ನು ಉಪಯೋಗಿಸಿ ಏನು ಮಾಡಬಹುದು...
    続きを読む 一部表示
    1分未満
  • [Kannada] ಓಂಕಾರದ ಜಾದೂ: ಪ್ರಜ್ಞೆಯ ಮೂರು ಸ್ಥಿತಿಗಳು.
    2026/07/11
    [Preview books] [Borrow books] [Pause] ಹಿಂದಿನ ಸಂಚಿಕೆಯಲ್ಲಿ, ಪ್ರಾಚೀನ-ಭಾರತೀಯರು ಪ್ರಜ್ಞೆಯ ಪರಿಕಲ್ಪನೆಯನ್ನು ಹೇಗೆ ನೋಡುತ್ತಿದ್ದರು, ಎಂಬುದರ ಕುರಿತು ನಾವು ಚರ್ಚಿಸುತ್ತಿದ್ದೆವು. ಒಂದು ನಿರ್ದಿಷ್ಟ ಉದಾಹರಣೆಯಾಗಿ, ನಾನು ಉಪನಿಷತ್ತುಗಳಲ್ಲಿ ಒಂದಾದ, 'ಮಾಂಡೂಕ್ಯ-ಉಪನಿಷತ್' ಅನ್ನು ತೆಗೆದುಕೊಂಡಿದ್ದೆ. ಮಾಂಡೂಕ್ಯ-ಉಪನಿಷತ್ತು ಅಥರ್ವವೇದದ ಒಂದು ಭಾಗವಾಗಿದೆ.ಈ ಸಣ್ಣ ಉಪನಿಷತ್ತು, ಪರಮ ಸತ್ಯವು ಪ್ರಜ್ಞೆಯ ನಾಲ್ಕು ಸ್ಥಿತಿಗಳಲ್ಲಿ ಹೇಗೆ ಪ್ರಕಟವಾಗುತ್ತದೆ ಎಂಬುದನ್ನು ವಿವರಿಸುತ್ತದೆ. ಇದು ಆ ಪರಮ ಸತ್ಯವನ್ನು 'ಓಂಕಾರ' ಎಂದು ಕರೆಯುತ್ತದೆ. ಇದು, ಪ್ರಜ್ಞೆಯ ನಾಲ್ಕು ಸ್ಥಿತಿಗಳನ್ನು ಜಾಗೃತ, ಸ್ವಪ್ನ, ಸುಷುಪ್ತಿ ಮತ್ತು ತುರೀಯ ಎಂದು ಗುರುತಿಸುತ್ತದೆ.ಈ ಸ್ಥಿತಿಗಳು, ಆ ಓಂಕಾರವು ಪಡೆದುಕೊಂಡಿರುವ ಅಸಂಖ್ಯಾತ ರೂಪಗಳಲ್ಲಿ ಅಸ್ತಿತ್ವದಲ್ಲಿವೆ. ನಾವು ಮೊದಲು ಚರ್ಚಿಸಿದಂತೆ, ಓಂಕಾರವು ದೇಶ ಮತ್ತು ಕಾಲಕ್ಕೆ ಮೀರಿದ್ದರಿಂದ ಇದು ಖಂಡಿತವಾಗಿ ಸಾಧ್ಯ. ಓಂಕಾರದ ವಿವಿಧ ರೂಪಗಳೇ ಬ್ರಹ್ಮಾಂಡದಾದ್ಯಂತ ವ್ಯಾಪಿಸಿರುವ ಜೀವಿಗಳು. ಆ ರೂಪಗಳು ದೇಶ ಮತ್ತು ಕಾಲದ ನಿಯಮಗಳಿಗೆ ಒಳಪಟ್ಟಿರುವುದರಿಂದ, ಅವು ಒಂದು ಬಾರಿಗೆ ಕೇವಲ ಒಂದು ಸ್ಥಿತಿಯಲ್ಲಿ ಮಾತ್ರ ಇರಲು ಸಾಧ್ಯ.ಈ ಸಂಚಿಕೆಯಲ್ಲಿ, ನಾವು ಈ ನಾಲ್ಕು ಸ್ಥಿತಿಗಳ ಪೈಕಿ ಮೊದಲ ಮೂರು ಸ್ಥಿತಿಗಳ ಬಗ್ಗೆ ತಿಳಿದುಕೊಳ್ಳೋಣ. ಎಲ್ಲಕ್ಕಿಂತ ಮೊದಲನೆಯ ಸ್ಥಿತಿಯೇ ಎಚ್ಚರದ ಸ್ಥಿತಿ, ಅಥವಾ ಪ್ರಜ್ಞೆಯ 'ಜಾಗೃತ' ಸ್ಥಿತಿ ಎಂದು ಕರೆಯಲ್ಪಡುವಂತಹುದು. ಈ ಸ್ಥಿತಿಯಲ್ಲಿರುವಾಗ, ಜೀವಿಯು ತನ್ನ ದೇಹದ ಹೊರಗಿನ ಪ್ರಪಂಚದೊಂದಿಗೆ ಸಂವಹನ ನಡೆಸುತ್ತದೆ.ಇದು ತನ್ನ ದೇಹದ ಹೊರಗಿನ ಪ್ರಪಂಚದಿಂದ ಮಾಹಿತಿಯನ್ನು ಸಂಗ್ರಹಿಸಲು ಕಣ್ಣುಗಳು, ಕಿವಿಗಳು ಮುಂತಾದ ತನ್ನ 5 ಜ್ಞಾನೇಂದ್ರಿಯಗಳನ್ನು ಬಳಸುತ್ತದೆ. ಹಾಗೆ ಪಡೆದ ಮಾಹಿತಿಯನ್ನು ಅದು ತನ್ನ ಮನಸ್ಸು, ಬುದ್ಧಿ, ಅಹಂಕಾರ ಮತ್ತು ಇತರ ಮಾನಸಿಕ ಸಾಮರ್ಥ್ಯಗಳನ್ನು ಬಳಸಿ ಸಂಸ್ಕರಿಸುತ್ತದೆ.ಮಾಹಿತಿ ಸಂಸ್ಕರಣೆಯಾದ ನಂತರ, ದೇಹವು ಆ ಬಾಹ್ಯ ವಸ್ತುಗಳನ್ನು ಅನುಭವಿಸಲು ಕೈಗಳು, ಕಾಲುಗಳು ಮುಂತಾದ 5 ಕರ್ಮೇಂದ್ರಿಯಗಳನ್ನು ಬಳಸುತ್ತದೆ. ಪ್ರಾಣ ಮುಂತಾದ ಐದು ಶಕ್ತಿಗಳು ಈ ಪ್ರಕ್ರಿಯೆಯಲ್ಲಿ ದೇಹ ಮತ್ತು ಮನಸ್ಸಿಗೆ ಬೆಂಬಲ ನೀಡುತ್ತವೆ.ಮೂಲಭೂತವಾಗಿ, ಜಾಗೃತ ಎಂಬುದು ದೇಹದ ಹೊರಗೆ ಇರುವ ಸ್ಥೂಲ ವಸ್ತುಗಳೊಂದಿಗೆ ವ್ಯವಹರಿಸುವ ಪ್ರಜ್ಞೆಯ ಸ್ಥಿತಿಯಾಗಿದೆ.ಉಪನಿಷತ್ತು ಇದನ್ನು ಹೀಗೆ ವಿವರಿಸುತ್ತದೆ.ಇದನ್ನೇ ನರವಿಜ್ಞಾನವು ಹೇಗೆ ನೋಡುತ್ತದೆ?ನರವಿಜ್ಞಾನದ ಪರಿಭಾಷೆಯಲ್ಲಿ, ಇದನ್ನು access consciousness ಎಂದು ಕರೆಯಲಾಗುತ್ತದೆ. ದೇಹ ಮತ್ತು ಮೆದುಳು ಈ ರೀತಿಯ ಪ್ರಜ್ಞೆಯನ್ನು ಹೇಗೆ ನಿಭಾಯಿಸುತ್ತವೆ ಎಂಬುದರ ಕುರಿತು ನರವಿಜ್ಞಾನಿಗಳು ಸಾಕಷ್ಟು ...
    続きを読む 一部表示
    1分未満
adbl_web_anon_alc_button_suppression_t1
まだレビューはありません